Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ನನ್ನೆಲ್ಲಾ ಸಾಧನೆಗಳಿಗೆ ಕಾರ್ಯಕರ್ತರೇ ಕಾರಣ – ನಳೀನ್

ಮಂಗಳೂರು : ಸಶಕ್ತ ಭಾರತ ನಿರ್ಮಾಣಕ್ಕೆ ಮತ್ತು ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಬಿಜೆಪಿಗೆ ಮತನೀಡಿ ನರೇಂದ್ರಮೋದಿಯವರನ್ನು ಪ್ರಧಾನಿಯಾಗಿಸಿ ಎಂದು ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಶ್ರೀ ನಳೀನ್ ಕುಮಾರ್ ಕಟೀಲ್‌ರವರು ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು (15-04-2014) ಹಳೇ ಸಿಟಿ ಬಸ್‌ಸ್ಟ್ಯಾಂಡ್ ಮೈದಾನದಲ್ಲಿ ಮಾತನಾಡುತ್ತಾ, ಕೆಲವು ವರ್ಷದ ಹಿಂದೆ ನಳಿನ್ ಕುಮಾರ್ ಯಾರೆಂದು ಕೇವಲ ಕಾರ್ಯಕರ್ತರಿಗೆ ಮಾತ್ರ ತಿಳಿದಿತ್ತು ಆದರೆ ಇಂದು ನನ್ನ ಎಲ್ಲಾ ಸಾಧನೆಯನ್ನು ಮತದಾರರಿಗೂ ತಿಳಿಯುವಂತೆ ಮಾಡುವಲ್ಲಿ ಕಾರ್ಯಕರ್ತರ ಪರಿಶ್ರಮ ಎದ್ದು ಕಾಣುತ್ತಿದ್ದು, ಮನೆ ಮನೆಗೆ ಐದು ವರ್ಷದ ಸಾಧನೆಗಳು ತಲುಪುವಂತಾಗಿದೆ. ಇದರ ಎಲ್ಲಾ ಶ್ರೇಯಸ್ಸು ಕಾರ್ಯಕರ್ತರಿಗೆ ಸಲ್ಲಬೇಕಾಗಿದೆ.

ಇಂದು ವಿಶ್ವವು ಭಾರತದತ್ತ ನೋಡುತ್ತಿದೆ ಏಕೆಂದರೆ ಭಾರತ ಜಗತ್‌ವಂದ್ಯವಾಗಲು ಹೊರಟಿದೆ. ಇಂದು ಮನೆ ಮನೆಯಲ್ಲಿ ಮೋದಿ ಅಲೆಯಿದೆ. ಮೋದಿ 12 ವರ್ಷಗಳ ಕಾಲ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತವನ್ನು ನೀಡಿದ್ದಾರೆ ಮತ್ತು ಅಭಿವೃದ್ಧಿಯನ್ನು ಮಾಡಿದ್ದಾರೆ. ದಕ್ಷಿಣ ಕನ್ನಡವೂ ಗುಜರಾತ್‌ನಂತೆ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಯೊಂದಿಗೆ ಮೋದಿಯವರ ಕನಸಿನ ಭಾರತವನ್ನು ಕಟ್ಟಲು ತಾವೆಲ್ಲರೂ ಕೈಗೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ಬಿಜೆಪಿಗೆ ಮತನೀಡಿ ಮೋದಿ ಹಾಗೂ ಪಕ್ಷವನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕಾಗಿ ವಿನಂತಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ನಾಯಕರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸಿದ್ದರು.

Highslide for Wordpress Plugin