Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸೌದಿಯಲ್ಲಿ ಸಂಕಷ್ಟದಲ್ಲಿರುವ ದ.ಕ.ಜಿಲ್ಲೆಯ ಖಾಮಿಲ್ ಉಸ್ತಾದ್ ಅವರಿಗೆ ನೆರವು

ಕರಾವಳಿ ಕರ್ನಾಟಕದ ಪ್ರಸಿದ್ದ ಸುನ್ನಿ ಪಂಡಿತ ಮೌಲಾನಾ ಜಿ ಯೆಮ್ ಖಾಮಿಲ್  ಉಸ್ತಾದ್ ರವರು ಸೌದಿಯಲ್ಲಿ ಸಂಕಷ್ಟದಲ್ಲಿರುವಾಗ ಉಸ್ತಾದ್­ರವರ ಕುಟುಂಬದ ಸದಸ್ಯರು ಸಂಸದ ನಳಿನ್ ಕುಮಾರ್ ಕಟೀಲ್­ರವರಿಗೆ ರಹಿಮ್ ಉಚ್ಚಿಲ್ ಹಾಗೂ ಮೌಲಾನಾ ಸಹದಿಯವರ ನೇತೃತ್ವದಲ್ಲಿ ಮನವಿ ಅರ್ಪಿಸಿದಾಗ ತಕ್ಷಣ ಕೇಂದ್ರ ಸಚಿವರಾದ ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ಉಸ್ತಾದ್ ಅವರ ಬಿಡುಗಡೆಗೆ ಬೇಕಾದ ಕ್ರಮ ಕೈಗೊಳ್ಳಲು ಆಗ್ರಹಿಸಿದರು. ಅಲ್ಲಿಯ ನ್ಯಾಯಲಯದಿಂದ ಜಾಮೀನು ಮೂಲಕ ಹೊರಬಂದಿರುವ ಜಿ. ಯೆಮ್. ಉಸ್ತಾದ್ ರವರು ಶೀಘ್ರವೇ ದೋಷ ಮುಕ್ತರಾಗಿ ದೇಶಕ್ಕೆ ಮರಳಲಿದ್ದಾರೆ.

ಸೌದಿಯಲ್ಲಿರುವ ವಿದೇಶಾಂಗ ಸಚಿವಾಲಯ ಈ ಸುದ್ದಿಯನ್ನು ಶ್ರೀಮತಿ ಸುಷ್ಮಾ ಸ್ವರಾಜ್ ಅವರಿಗೆ ನೀಡಿತು. ಈ ಸಮಾಚಾರವನ್ನು ಕೇಂದ್ರ ಸಚಿವರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಮೂಲಕ ತಿಳಿಸಿದ್ದಾರೆ ಎಂದು ರಹಿಮ್ ಉಚ್ಚಿಲ್ ಅವರು ತಿಳಿಸಿದ್ದಾರೆ.

Letter

Highslide for Wordpress Plugin