Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ನಾಪತ್ತೆಯಾಗಿರುವ ಮೀನುಗಾರನ್ನು ಪತ್ತೆಹಚ್ಚಿಕೊಡುವಂತೆ ಗೃಹಸಚಿವರಿಗೆ ಮನವಿ

ಸುವರ್ಣ ತ್ರಿಭುಜ ಎಂಬ ಆಳಸಮುದ್ರ ಟ್ರಾಲ್ ಬೋಟಿನ ಸಹಿತ ಏಳು ಮಂದಿ ಮೀನುಗಾರರು ಸಮುದ್ರದಲ್ಲಿ ಕಣ್ಮರೆಯಾಗಿದ್ದು ಈವರೆಗೆ ಪತ್ತೆಯಾಗಿರುವುದಿಲ್ಲ. ಕೇಂದ್ರ ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನಾಪತ್ತೆಯಾಗಿರುವ ಮೀನುಗಾರನ್ನು ಪತ್ತೆಹಚ್ಚಿಕೊಡುವಂತೆ ಮಾನ್ಯ ಗೃಹಸಚಿವರಾದ ರಾಜನಾಥ್ ಸಿಂಗ್ ಅವರನ್ನು ದಿನಾಂಕ 3-1-2019 ರಂದು ನವದೆಹಲಿಯಲ್ಲಿ ಭೇಟಿಯಾಗಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಉಡುಪಿ ಶಾಸಕ  ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್ ಅವರನ್ನೊಳಗೊಂಡ ನಿಯೋಗವು ಮನವಿ ಮಾಡಿತು. ಮನವಿಗೆ ಕೇಂದ್ರ ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

With Rajnath Singh

Highslide for Wordpress Plugin