Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಅ. 18 : ರಾಯಚೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ರಾಜ್ಯಾಧ್ಯಕ್ಷರು

ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರ ಸಭೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ಸಂಸದರಾದ ರಾಜಾ ಅಮರೇಶ್ ನಾಯಕ, ಜಿಲ್ಲಾಧ್ಯಕ್ಷರಾದ ಶ್ರೀ ಶರಣಪ್ಪಗೌಡ ಜಾದಲ ದಿನ್ನಿ, ವಿಭಾಗ ಪ್ರಭಾರಿಗಳಾದ ಅಶೋಕ್ ಗಸ್ತಿ, ಶಾಸಕರಾದ ಡಾ ಶಿವರಾಜ್ ಪಾಟೀಲ್ ಮತ್ತು ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ರಾಯಚೂರು ನಗರ ಮತಗಟ್ಟೆ ಅಧ್ಯಕ್ಷರ ಸಭೆ ಇಂದು ನಡೆಯಿತು. ಮತಗಟ್ಟೆ ಅಧ್ಯಕ್ಷರ ನಿಯುಕ್ತಿ, ಜವಾಬ್ದಾರಿ ನೀಡಿ, ನಾಮಫಲಕ ವಿತರಣೆ ಮಾಡಲಾಗಿದ್ದು ಈ ರೀತಿಯ ಕಾರ್ಯಕ್ರಮವು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ನಡೆದಿದೆ. ಇದೇ ಸಂದರ್ಭದಲ್ಲಿ ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಸಕ್ರೀಯ ಸದಸ್ಯತಾ ಅಭಿಯಾನ ಪೂರ್ಣಗೊಂಡಿರುವ ವರದಿಯನ್ನು ಸಂಪೂರ್ಣ ಶುಲ್ಕದೊಂದಿಗೆ ಮಾನ್ಯ ರಾಜ್ಯಾಧ್ಯಕ್ಷರಿಗೆ ನೀಡಲಾಯಿತು.

Highslide for Wordpress Plugin